ಪವಿತ್ರ ಕೈಲಾಸ ಪರಿಕ್ರಮೆ ಯಶಸ್ವಿಯಾಗಿ ಸಂಪನ್ನ

ಶಿವ ಮಹಾದೇವರ, ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿಯವರ ಹಾಗೂ ಪರಮಪೂಜ್ಯ ಶ್ರೀಶೈಲ ಜಗದ್ಗುರು ಡಾ. ಚೆನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳವರ ದಿವ್ಯ ಕೃಪಾಶೀರ್ವಾದದಿಂದ ಇಂದು ಮೂರು ದಿನಗಳ ಪವಿತ್ರ ಕೈಲಾಸ ಪರಿಕ್ರಮೆಯನ್ನು ಯಶಸ್ವಿಯಾಗಿ ಸಂಪೂರ್ಣಗೊಳಿಸುವ ಸೌಭಾಗ್ಯ ದೊರೆಯಿತು.

ಈ ಪವಿತ್ರ, ಅವಿಸ್ಮರಣೀಯ ಹಾಗೂ ಆಧ್ಯಾತ್ಮಿಕ ಯಾತ್ರೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಅನುಗ್ರಹಿಸಿದ ಪರಮಶಿವನಿಗೂ, ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿಯವರಿಗೂ, ಪರಮಪೂಜ್ಯ ಶ್ರೀಶೈಲ ಜಗದ್ಗುರುಗಳವರಿಗೂ ಹಾಗೂ ಆರಾಧ್ಯ ಗುರುಗಳಾದ ಮನಗೂಳಿ ಮತ್ತು ಬೆಂಗಳೂರಿನ ಲಿಂಗೈಕ್ಯ ಉಭಯ ಗುರುಗಳವರ ಪಾದಕಮಲಗಳಿಗೆ ನಮ್ಮ ಭಕ್ತಿಪೂರ್ವಕ ಕೃತಜ್ಞತೆಗಳನ್ನು ಸಮರ್ಪಿಸುತ್ತೇವೆ.

ಈ ದಿವ್ಯ ಯಾತ್ರೆಯ ಪ್ರತಿಯೊಂದು ಹೆಜ್ಜೆಯೂ ಭಕ್ತಿ, ತಪಸ್ಸು, ಆತ್ಮಶುದ್ಧಿ ಹಾಗೂ ಪರಮಾತ್ಮನ ಅನುಗ್ರಹದ ಅನುಭೂತಿಯನ್ನು ನೀಡಿದ್ದು, ಜೀವನದ ಅತ್ಯಂತ ಅಮೂಲ್ಯ ಹಾಗೂ ಚಿರಸ್ಮರಣೀಯ ಆಧ್ಯಾತ್ಮಿಕ ಅನುಭವವಾಗಿ ಸದಾ ಹೃದಯದಲ್ಲಿ ಉಳಿಯಲಿದೆ.

Leave a Comment